ಯಕ್ಷಗಾನ ಕಲಾವಿದ ತೀರ್ಥಳ್ಳಿ ಗೋಪಾಲಾಚಾರ್ಯರಿಗೆ ಯಕ್ಷರತ್ನ ಪ್ರಶಸ್ತಿ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಬುಧವಾರ, ಮಾರ್ಚ್ 4 , 2015
|
ಮಾರ್ಚ್ 4, 2015
|
ಯಕ್ಷಗಾನ ಕಲಾವಿದ ತೀರ್ಥಳ್ಳಿ ಗೋಪಾಲಾಚಾರ್ಯರಿಗೆ ಯಕ್ಷರತ್ನ ಪ್ರಶಸ್ತಿ
ಕುಂದಾಪುರ :
ಬಡಗುತಿಟ್ಟಿನ ಅಬಿಜಾತ ಕಲಾವಿದ ಅರವತ್ತರ ಅಬಿಮನ್ಯು ತೀರ್ಥಳ್ಳಿ ಗೋಪಾಲಾಚಾರ್ಯರಿಗೆ ಕುಂದಾಪುರದ ಯಕ್ಷಮಿತ್ರರು ನೀಡುವ ಪ್ರತಿಷ್ಟಿತ ಪ್ರಥಮ ವರ್ಷದ ಯಕ್ಷರತ್ನ ನೀಡಿ ಗೌರವಿಸಲಾಗುವುದು. ಉಡುಪಿ ಶ್ರೀ ಕ್ರಷ್ಣ ಮಠದ ಶೀರೂರು ಶ್ರೀ ಶ್ರೀ ಶ್ರೀ ಲಕ್ಷ್ಮಿವರತೀರ್ಥ ಶ್ರೀಪಾದರು ಮಾರ್ಚ್ 7 ರಂದು ಕುಂದಾಪುರದಲ್ಲಿ ಶ್ರೀ ಪೆರ್ಡೂರು ಮೇಳದ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡುವರು.
ಅಮೃತೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಆನಂದ ಕುಂದರ್ ಅದ್ಯಕ್ಷತೆ ವಹಿಸುವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಪ್ರೋ. ಎಸ್. ವಿ ಉದಯಕುಮಾರ ಶೆಟ್ಟಿ ಅಭಿನಂದನಾ ಭಾಷಣ ಮಾಡುವರು. ಪೆರ್ಡೂರು ಮೇಳದ ವ್ಯವಸ್ಥಾಪಕ ಕರುಣಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಬಾಗವಹಿಸುವರು ಎಂದು ಕಾರ್ಯಕ್ರಮದ ಸಂಯ್ಯೋಜಕ ಸುರೇಶ ಹಂಗಳೂರು ತಿಳಿಸಿದ್ದಾರೆ. ಬಳಿಕ ಪೆರ್ಡೂರು ಮೇಳ ಮತ್ತು ಅಥಿತಿ ಕಲಾವಿದರಿಂದ ವಿದ್ಯುನ್ಮತಿ ಕಲ್ಯಾಣ - ಕಾರ್ತವೀರ್ಯ - ಸುಂದೋಪಸುಂದ ಪ್ರಸಂಗಗಳ ಪ್ರದರ್ಶನವಿದೆ ಎಂದು ತಿಳಿಸಿದರು.
|
|
|